ಅದು ಸರಕಾರಿ ಅಧಿಕಾರಿಯೊಬ್ಬರ ಕಚೇರಿ. ಅವರೊಬ್ಬ ದಕ್ಷ ಅಧಿಕಾರಿ. ಅದರಲ್ಲಿ ಎರಡು ಮಾತಿಲ್ಲ. ನೇರವಾಗಿ ಹೇಳುವ ,ಸರಕಾರದ ಎಲ್ಲಾ ಯೋಜನೆಗಳನ್ನು ಕಟ್ಟ ಕಡೆಯ ವ್ಯಕ್ತಿಗೆ ಮುಟ್ಟಿಸಬೇಕೆಂಬ ತುಡಿತವಿರೋ ಒಬ್ಬ ಒಳ್ಳೆಯ ಅಧಿಕಾರಿ. ಅವರ ಮುಂದೆ ಯಾವುದೋ ವಿಚಾರಕ್ಕೆ ಸಂಬಂಧಿಸಿ ಕುಳಿತುಕೊಂಡಿದ್ದೆ. ಅವರು ಯಾವತ್ತೂ ಹಾಗೆ ಮಾತನಾಡಿದವರಲ್ಲ , ಮಾತನಾಡೋದೂ ಇಲ್ಲ. ಯಾವತ್ತೂ ಆಶಾವಾದಿಯಾಗಿ ಮಾತಾಡೋರು.
ಆದ್ರೆ ಇಂದ್ಯಾಕೋ ಅವರಿಗೆ ಮೀಡಿಯಾಗಳ ಬಗ್ಗೆ ಬೇಜಾರಿತ್ತು. ಹಾಗಾಗಿ ಅವರು ಹೇಳಿದ್ದು, ಯಾಕ್ರೀ ಹೀಗೆ . .? ಅಂತ .ಅದಕ್ಕೆ ಉತ್ತರ ನಮ್ಮಲ್ಲಿ ಇದ್ದಿರಲಿಲ್ಲ. ಯಾಕೆಂದ್ರೆ 'ನಾನು ಹೀಗೆ' ಅಂತ ಹೇಳಬಹುದು , 'ನಾವೆಲ್ಲಾ ಹೀಗಿರ್ತೇವೆ 'ಅಂತ ಹೇಳಲು ಸಾಧ್ಯನಾ?.ಇಲ್ಲವೇ ಇಲ್ಲ. ಹಾಗಾಗಿ ಉತ್ತರವಿಲ್ಲದೆ ಅವರ ಮುಂದೆ ಕುಳಿತಿದ್ದೆವು.ಸಮರ್ಥಿಸುವುದೂ ಆತ್ಮಸಾಕ್ಷಿಗೆ ವಿರುದ್ದವಾಗುತ್ತದೆ.ಅವರು ಹೇಳುವ ವಿಚಾರವೂ ಅರ್ಥಪೂರ್ಣವಾಗಿತ್ತು. ಕೊನೆಗೆ ಅವರು ಹೇಳಿದ್ರು ನನಗೆ ಈ ಕೆಲಸವೇ ಬೇಡವಾಗಿತ್ತು. 'ನಿಮ್ಮಿಂದಾಗಿ'.ದೊಡ್ಡ ಸಮಸ್ಯೆಯಾಗಿದೆ.ಮಾತಾಡಿದ್ರೆ ನಾಳೆ ಅದೂ ತಪ್ಪಾಗುತ್ತೆ. ಜನ ಯಾರೂ ಏನೂ ಹೇಳಲ್ಲ.ನಿಮ್ಮದೇ ತೊಂದರೆ ಅಂತ ಹೇಳಿದ್ರು.ಅದಕ್ಕೆ ಕಾರಣವೂ ಇತ್ತು.
ಮೊನ್ನೆ ಅಘೋಷಿತವಾದ ಬಂದ್ ಆದ ಬಳಿಕ ಅಲ್ಯಾವುದೋ ಪ್ರಾರ್ಥನಾ ಮಂದಿರದ ನಾಮಫಲಕಕ್ಕೆ ಇನ್ಯಾರೋ ಹಾನಿ ಮಾಡಿದ್ದರು. ಈ ಸುದ್ದಿ ಇಡೀ ಊರಿಗೆ ಹಬ್ಬಿತು. ದೂರ ಮಂಗಳೂರಿಗೂ ಈ ಸುದ್ದಿ ಹೋಯಿತು.ಅಲ್ಲಿಂದ ಒಂದೆರಡು ಮೀಡಿಯಾವೂ ಹೊರಟಿತು. ಇದೆಲ್ಲಾ ಗೊತ್ತಾದ ಕೂಡಲೇ, ಎಲ್ಲಾ ಅಧಿಕಾರಿಗಳು , ಎಲ್ಲಾ ಮೀಡಿಯಾದವರಿಗೂ ರಿಕ್ವೆಸ್ಟ್ ಮಾಡಿದರು , ಈಗ ಪ್ಲೀಸ್ . ,.ಇದನ್ನು ಮಾಡ್ಬೇಡಿ , ಊರಿಗೇ ಕೊಳ್ಳಿ ಹಚ್ಚೋ ಕೆಲಸ ಬೇಡ ಅಂತಲೂ ವಿನಂತಿ ಮಾಡಿದ್ರು. ಆದ್ರೆ ಇದ್ಯಾವುದನ್ನೂ ಕ್ಯಾರೇ ಮಾಡದೇ ಅವರು ಆ ಸ್ಪಾಟ್ ಕಡೆಗೆ ಹೊರಟ್ರು. ಆಗಲೇ ಹಾನಿಯಾದ ಫಲಕವನ್ನು ಪೊಲೀಸರೇ ದುರಸ್ಥಿ ಮಾಡಿ ಸಂಭ್ಯಾವ್ಯ ಎಲ್ಲಾ ಅಶಾಂತಿಯ್ನನೂ ತಪ್ಪಿಸಿದ್ರು. ಆದ್ರೂ ಈ ಮೀಡಿಯಾಗಳು ಅಲ್ಲಿಗೆ ಹೋಗಿ ಸುದ್ದಿಯನ್ನೂ ಮಾಡಿದವು. ಅಧಿಕಾರಿಗಳು ಮಾಡಿದ ವಿನಂತಿ ಎಲ್ಲವೂ ಗಾಳಿಗೆ ತೂರಿ ಹೋಯಿತು. ಉಳಿದೆಲ್ಲಾ ಸಂದರ್ಭಗಳಲ್ಲಿ ಮೀಡಿಯಾದ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸುವ ಅಧಿಕಾರಿಗಳು ಊರಿಗೆ ಕೊಳ್ಳಿ ಹಚ್ಚೋ ಕೆಲಸ ಮಾಡಬೇಡಿ ಎಂದಾಗಲೂ ಅದನ್ನು ಕ್ಯಾರೇ ಮಾಡಿಲ್ಲ. ಹಾಗಾಗಿ ಮೀಡಿಯಾಗಳಿಗೆ ಬೇಕಾದ್ದು ಏನು ಎಂಬುದು ಆ ಅಧಿಕಾರಿಗಳ ಪ್ರಶ್ನೆ. ಇದರಿಂದ ಅವರು ಸಾಧಿಸಿದ್ದಾದರೂ ಏನು?.ಅಲ್ಲಿ ನಾಮಫಲಕಕ್ಕೆ ಹಾನಿ ಮಾಡಿದ್ದು ಸರ್ವಥಾ ಒಪ್ಪುವ ಕೆಲಸವಲ್ಲ.ಆದ್ರೆ ಆ ಸಂದರ್ಭದಲ್ಲಿ ಅದು ಸುದ್ದಿಯಾಗದೇ ಇರುವುದು ಒಳಿತು ಅಷ್ಟೆ. ಇದೊಂದೇ ಅಲ್ಲ ಅಂತಹದ್ದೇ ಎಷ್ಟೋ ಉದಾಹರಣೆ ಇದ್ದೇ ಇತ್ತು. ಹಾಗಂತ ಯಾವಾಗಲೂ ಅಧಿಕಾರಿಗಳ ಪರ ಇರಬೇಕು ಅಂತಲ್ಲ. ಕೆಲವೊಂದು ಸೂಕ್ಷ್ಮ ಪರಿಸ್ಥಿತಿಗಳಲ್ಲಿ ಮೀಡಿಯಾಗಳಿಗೂ ಜವಾಬ್ದಾರಿ ಇಲ್ಲವೇ ಎಂಬುದು ಇದರ ಒಳನೋಟ ಅಷ್ಟೆ.
ಅವೆಲ್ಲಾ ಇಲ್ಲಿಯ ಕತೆಯಾಯಿತು.
ಈಗಂತೂ ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿರುವ ಕಾಮನ್ವೆಲ್ತ್ ಕೀಡಾಕೂಟ ನಮ್ಮ ದೇಶದಲ್ಲಿ ನಡೀತಾ ಇದೆ. ಕಳೆದ ಸುಮಾರು ಆರುಮುಕ್ಕಾಲು ವರ್ಷಗಳಿಂದ ಅದಕ್ಕಾಗಿ ಕೆಲಸ ಮಾಡಿ ಈಗ ನಮ್ಮ ದೇಶದಲ್ಲಿ 19 ನೇ ಕಾಮನ್ವೆಲ್ತ್ ಕ್ರೀಡಾಕೂಟ ನಡೀತಾ ಇದೆ.ಇದರ ಸಿದ್ದತೆ , ವ್ಯವಸ್ಥೆ , ಅಚ್ಚುಕಟ್ಟು ಹೀಗೇ ಎಲ್ಲವನ್ನೂ ನಾವಲ್ಲ ದೇಶಕ್ಕೆ ಬಂದ ಕ್ರೀಡಾಪಟುಗಳು , ಗಣ್ಯಾತಿ ಗಣ್ಯರು ಹೇಳಿಹೊಗಳಿದ್ದಾರೆ.ಇದೆಲ್ಲವೂ ನಮ್ಮ ಕೆಲ ಪತ್ರಿಕೆಗಳಲ್ಲಿ ಬಂದಿದೆ.ಆದರೆ ನಮ್ಮವರ್ ಯಾರು ಹೇಳಿಕೊಂಡಿಲ್ಲ. ಭೇಷ್ ಅನ್ನಲೇ ಇಲ್ಲ. ನಮ್ಮ ಸಿದ್ದತೆ ಹೀಗಿದೆ ಅಂತ ವಿದೇಕ್ಕೆ ಹೇಳಲೇ ಇಲ್ಲ. ನಮ್ಮ ಕ್ರೀಡಾ ಪಟುಗಳಿಗೆ ಇಂತಹದ್ದು ತಿಂದರೆ ,ಕುಡಿದರೆ ಒಳ್ಳೆತಯದಲ್ಲ ಇದು ಉದೀಪನಾ ಔಷಧಿಯಾಗುತ್ತದೆ ಅನ್ನಲೂ ಇಲ್ಲ , ಆದರೆ ವಿದೇಶದ ಒಂದು ಸಂಸ್ಥೆ ಕುಟುಕು ಕಾರ್ಯಾಚರಣೆ ನಡೆಸಿ ಎಲ್ಲವೂ ಅವ್ಯವಸ್ಥೆ ಎನ್ನುತ್ತದೆ , ನಾವೆಲ್ಲರೂ ಅದನ್ನು ಹೌದು ಎನ್ನುತ್ತೇವೆ. ಅದೇ ದೆಹಲಿಯ ಸೇತುವೆಯೊಂದು ಕೆಲವೇ ದಿನಕ್ಕೆ ಮುಂದೆ ಕುಸಿಯುತ್ತದೆ.ಆದರೆ ಮತ್ತೆ 10 ದಿನದಲ್ಲಿ ಅದು ಸಂಚಾರಕ್ಕೆ ಸಿದ್ದವಾಗುತ್ತದೆ.ನಮ್ಮ ಸೈನಿಕ ಬಳಗದ ಸಾಧನೆ ಅದು. ಆದರೆ ಯಾರೂ ಹೇಳಿಲ್ಲ.ಅಂತಹದ್ದೊಂದು ಸಾಧನೆ ಆಗಿದೆ ಅಂತ ಗೊತ್ತೇ ಇಲ್ಲ , ಲೈವ್ ಅಂತೂ ಇಲ್ಲವೇ ಇಲ್ಲ. ಇದೆಲ್ಲವೂ ನಮ್ಮಲ್ಲಿ ಮಾತ್ರಾ ಸಾಧ್ಯ.
ಹಾಗಾಗಿ ಈ ಜಗವೇ ಬದಲಾದರೂ ನಾವು ಬದಲಾಗೋದಿಕ್ಕೆ ಇದೆಯಾ?.
ಯಾಕೆಂದ್ರೆ ಇಲ್ಲಿ ಒಂದು ವಿಚಾರ ಹೇಳಿದಾಗಲೂ ಅದರ ನಡುವೆ ಜಾತಿ ಸಂಘಟನೆಗಳು , ಇನ್ನೊಂದು ಸಂಘಗಳು ಬಂದು , ಅದನ್ನು ಇನ್ನೊಂದು ರೀತಿಯಲ್ಲಿ ಪ್ರಚಾರ ಮಾಡಿ ಬಿಡುವ ಮನಸ್ಥಿತಿ ಇಲ್ಲಿಯ ಜನರದ್ದು.ಇನ್ನು ಅದೇ ಸಂಘಟನೆಯ ಅಡಿಯಲ್ಲಿ ಇನ್ನೊಬ್ಬನನ್ನು ತುಳಿದು ಸಂತಸ ಪಡೋ ಮಂದಿಯೇ ಇಲ್ಲಿದ್ದಾರೆ , ವಿಷಯವನ್ನು ಪರಾಮರ್ಶಿಸುವ ಗೋಜಿಗೇ ಹೋಗುವುದಿಲ್ಲ.ಒಳ್ಳೆಯದನ್ನು , ಸತ್ಯವನ್ನು ಒಪ್ಪಿಕೊಳ್ಳೋದೇ ಇಲ್ಲ.ಎಲ್ಲವೂ ನಮ್ಮ ಮೂಗಿನ ನೇರಕ್ಕೆ.
ಹೋ . . ಅಲ್ಲಿ ಆತ ಸರಕಾರದ ಆಸ್ಥಿ ಕಬಳಿಸಿದ ಅಂತ ಬೊಬ್ಬಿಡುತ್ತಾರೆ , ಯಾಕೆ ಗೊತ್ತಾ ?,ಇವನಿಗೆ ಮಾಡಲಾಗಿಲ್ಲವಲ್ಲಾ ಎಂಬ ಹೊಟ್ಟೆಕಿಚ್ಚಿನಿಂದ. ಇದಲ್ವಾ ನಮ್ಮಲಿ ನಡೀತಾ ಇರೋದು .?. ಆತ್ಮವಿಮರ್ಶೆಗಾಗಿ ಅಷ್ಟೆ.
Sushasaks(Good Administrators) needed for Sushasan (Good Governance)
-
(Text of the concluding speech delivered by Ram Madhav at the Rambhau
Mhalgi Prabodhini workshop on ‘Quality Manpower for Good Governance’ on
26-05-12 at D...
47 ನಿಮಿಷಗಳ ಹಿಂದೆ


